• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್‌ಗಳು: ಕಂಪ್ಲೀಟ್‌ ಲಿಸ್ಟ್‌!

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್‌ಗಳು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022-23ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್‌/ಏಪ್ರಿಲ್‌ ತಿಂಗಳಿನಲ್ಲಿ ನಡೆಸಲಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಮೇ ತಿಂಗಳಿನಲ್ಲಿ ಫಲಿತಾಂಶವನ್ನು ಪ್ರಕಟಿಸಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ. ಈ ಲೇಖನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022, 2021, 2020 ಹಾಗೂ 2019ರ ಟಾಪರ್‌ಗಳ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಫಲಿತಾಂಶದ ಅಂಕಿಅಂಶಗಳು, ಹಿಂದಿನ ವರ್ಷಗಳ ಫಲಿತಾಂಶ ವಿಶ್ಲೇಷಣೆ, ಮರು-ಮೌಲ್ಯಮಾಪನ ಪ್ರಕ್ರಿಯೆ ಮತ್ತು ವಿಭಾಗ ಪರೀಕ್ಷೆಗಳಂತಹ ಇತರ ವಿವರಗಳನ್ನು ಸಹ ನೋಡಬಹುದು.

ಎಸ್ಎಸ್ಎಲ್‌ಸಿ ಪರೀಕ್ಷೆ ಟಾಪರ್‌ಗಳು 2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ) 2022ರ ಎಸ್‌ಎಸ್‌ಎಲ್‌ಸಿ (ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್) ಫಲಿತಾಂಶವನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇದರೊಂದಿಗೆ ಮಂಡಳಿಯು ಎ‌‌‌ಸ್ಎಸ್ಎಲ್‌ಸಿ ಪರೀಕ್ಷೆ 2022ರ ಫಲಿತಾಂಶಗಳೊಂದಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ SSLC ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 11, 2022 ರವರೆಗೆ ಯಶಸ್ವಿಯಾಗಿ ನಡೆಯಿತು. ಪರೀಕ್ಷೆಯ ಸಮಯವನ್ನು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ರವರೆಗೆ ನಡೆಸಲಾಯಿತು. ಈ ವರ್ಷ, ಕರ್ನಾಟಕದಾದ್ಯಂತ 15,387 ಶಾಲೆಗಳಿಂದ ಒಟ್ಟು 8,73,846 ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ SSLC ಫಲಿತಾಂಶ 2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 853436 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಬಾರಿಯ 2021-22ನೇ ಸಾಲಿನಲ್ಲಿ ಪರೀಕ್ಷೆಗೆ  873859 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2021-22ರ ಫಲಿತಾಂಶ ವಿವರ:

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022 ರಲ್ಲಿ ಪೂರ್ಣ ಅಂಕಗಳನ್ನು (625 ರಲ್ಲಿ 625) ಗಳಿಸಿದ ವಿದ್ಯಾರ್ಥಿಗಳ ಪಟ್ಟಿ

ಈ ಬಾರಿ ದಾಖಲೆಯ 145 ಮಂದಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಕ್ರ.ಸಂವಿದ್ಯಾರ್ಥಿ ಹೆಸರುಸ್ಥಳ
1ಅಮಿತ್ ಮಾದಾರವಿಜಯಪುರ
2ಭೂಮಿಕಾ ಬಿಆರ್ತುಮಕೂರು
3ಪ್ರವೀಣ ನೀರಲಗಿಹಾವೇರಿ
4ಸಹನಾ ಮಹಾಂತೇಶ ರಾಯರ್ಬೆಳಗಾವಿ
5ಐಶ್ವರ್ಯ ಲಕ್ಷ್ಮಣ ಕನಸೆವಿಜಯಪುರ
6ಆಕೃತಿ ಎಸ್ ಎಸ್ಚಿಕ್ಕಮಗಳೂರು
7ಅರ್ಜುನ್ ಇ ನಾಯಕ್ಹಾಸನ
8ಚಿರಾಗ್ ಮಹೇಶ್ ನಾಯ್ಕ್ಸಿರ್ಸಿ
9ಏಕತಾ ಎಂ ಜಿಮೈಸೂರು
10ಗಾಯತ್ರಿಉಡುಪಿ
11ನಿಶಾಉಡುಪಿ
12ಪ್ರಗತಿ ಎಚ್ ಎನ್ಹಾಸನ
13ಪುನೀತ್ ನಾಯ್ಕಉಡುಪಿ
14ರೋಶನ್ಮಂಗಳೂರು
15ಸಾತ್ವಿಕ್ ಎಚ್ ಎಸ್ಮಂಗಳೂರು
16ಶಂಭು ಶಿವಾನಂದ್ ಖಾನಾಯಿಚಿಕ್ಕೋಡಿ
17ಶಿವಲೀಲಾ ಶಿವಲಿಂಗಪ್ಪ ದುರ್ಗೆವಿಜಯಪುರ
18ಸಿಂಚನಾ ಕೆ ಎಂಚಿತ್ರದುಗ್ರ
19ಸ್ವಾತಿ ಗೌಡಪ್ಪ ಮಾಲೇದ್ವಿಜಯಪುರ
20ವೈಷ್ಣವಿ ಶೆಟ್ಟಿಉಡುಪಿ
21ಯಶವಿತಾ ಟಿ.ಎಸ್ಹಾಸನ
22ಕನ್ನಿಕಾಪರಮೇಶ್ವರಿ ರಾಮಚಂದ್ರ ಹೆಡ್ಗೆಶಿರಸಿ
23ಮಧು ಬಸವರಾಜ ಶೇತಸನದಿಹಾವೇರಿ
24ಸ್ವಾತಿ ಸುರೇಶ ತೊಲಗಿಬೆಳಗಾವಿ
25ವರ್ಷಾ ಅನಿಲ್ ಪಟೇಲ್ಚಿಕ್ಕೋಡಿ
26ಆದಿತ್ಯ ಎ ಎಸ್ಬೆಂಗಳೂರು ದಕ್ಷಿಣ
27ಚಾರುಕೀರ್ತಿ ಕೆಮೈಸೂರು
28ಮಹಾಲಕ್ಷ್ಮಿ ಸಿಹಾಸನ
29ಸುಜಯ್ ಬಿಮಂಗಳೂರು
30ಇಂದಿರಾ ಅರುಣ್ ನ್ಯಾಮಗೌಡರ್ಮಂಗಳೂರು
31ಈರಯ್ಯ ಶ್ರೀಶೈಲ್ ಶೇಗುಣಸಿಮಠಮಂಗಳೂರು
32ಕಲ್ಮೇಶ್ವರ ಪುಂಡಲೀಕ ನಾಯಕ್ಮಂಗಳೂರು
33ಶ್ರೇಯಾ ಆರ್ ಶೆಟ್ಟಿಮಂಗಳೂರು
34ಸುದೇಶ್ ದತ್ತಾತ್ರೇ ಕಿಲ್ಲೇದಾರ್ಮಂಗಳೂರು
35ಅಭಯ್ ಶರ್ಮಾ ಕೆಮಂಗಳೂರು
36ಅಭಿಜ್ಞಾ ಬಿಬೆಂಗಳೂರು ದಕ್ಷಿಣ
37ಅಭಿಜ್ಞಾ ಆರ್ಮಂಗಳೂರು
38ಅಭಿಷೇಕ್ ಗೌಡ ಕೆಹಾಸನ
39ಆದರ್ಶ ಬಸವರಾಜ ಹಾಲಭಾವಿಬೆಳಗಾವಿ
40ಅದಿತಿ ಬಿ ಎಸ್ಮೈಸೂರು
41ಅಕ್ಷತಾಉಡುಪಿ
42ಅಮೋಘ್ ಎನ್ ಕೌಶಿಕ್ಬೆಳಗಾವಿ
43ಅಮೃತಾ ಬಿಬಳ್ಳಾರಿ
44ಅಮೂಲ್ಯ ಎಂ ಎಸ್ಕೋಲಾರ
45ಅನಘಾ ಎಂ ಮೂರ್ತಿಬೆಂಗಳೂರು ಉತ್ತರ
46ಅನನ್ಯ ಹೆಚ್ ಎನ್ಶಿವಮೊಗ್ಗ
47ಅನೀಶಾ ಎನ್ ಭಾರದ್ವಾಜ್ಬೆಂಗಳೂರು ಉತ್ತರ
48ಅನ್ನಪೂರ್ಣ ಎಚ್ ವಿಚಿಕ್ಕಮಗಳೂರು
49ಅಪೋರ್ವ ಎಚ್ ಎಸ್ಮಂಡ್ಯ
50ಆತ್ಮೀಯ ಎಂ ಕಶ್ಯಪ್ಮಂಗಳೂರು
51ಅವನಿ ಕೆಬೆಂಗಳೂರು ದಕ್ಷಿಣ
52ಬಿ ಜಯಶ್ರೀಬೆಂಗಳೂರು ಉತ್ತರ
53ಭೂಮಿಕಾ ಬಿ ಕೆಹಾಸನ
54ಭೂಮಿಕಾ ಸಿ ಆರ್ಶಿವಮೊಗ್ಗ
55ಭುವನ್ ಕುಂಚುಮ್ ಆರ್ಚಿತ್ರದುರ್ಗ
56ಸಿ ಎಸ್ ಕವನಬಳ್ಳಾರಿ
57ಚೈತನ್ಯ ಜೆಬೆಂಗಳೂರು ಗ್ರಾಮಾಂತರ
58ಚಂದು ಎಸ್ಬೆಂಗಳೂರು ಉತ್ತರ
59ಚರಿತ ಎಂ ಗೌಡಚಿಕ್ಕಮಗಳೂರು
60ದೀಕ್ಷಾ ಪಾಂಡುರಂಗ ನಾಯಕ್ಉತ್ತರ ಕನ್ನಡ
61ದೇವಿಕಾ ಜಿಮೈಸೂರು
62ಧನ್ಯಶ್ರೀಮಂಗಳೂರು
63ದಿಶಾ ಬಿ ಎಂಮೈಸೂರು
64ಜಿ ಹರ್ಷಿತಾಚಿಕ್ಕಬಳ್ಳಾಪುರ
65ಗಗನ್ ಕೆ ಎಂಮಂಡ್ಯ
66ಗಾನ ಸಿ ಶೇಖರ್ಬೆಂಗಳೂರು ಉತ್ತರ
67ಹರ್ಷಿತಾ ಎಚ್ ಸಿಹಾಸನ
68ಹರ್ಷಿತಾ ಎಂಬೆಂಗಳೂರು ದಕ್ಷಿಣ
69ಹೇಮಂತ್ ಎಸ್ ಗೌಡಬೆಂಗಳೂರು ಉತ್ತರ
70ಇಂಚರ ಎಲ್ಹಾಸನ
71ಜಯತಿ ಬಿ ಗೌಡಚಿಕ್ಕಬಳ್ಳಾಪುರ
72ಜ್ಞಾನವಿ ಎಚ್ ಡಿಚಿಕ್ಕಮಗಳೂರು
73ಕಲ್ಯಾಣ್ ಎಂ ಎಂಹಾಸನ
74ಕಾರ್ಣಿಕ ಎಕೋಲಾರ
75ಕಾರ್ತಿಕ್ ಭಟ್ಉತ್ತರ ಕನ್ನಡ
76ಲಾವಣ್ಯ ಎಚ್ ಎನ್ಬೆಂಗಳೂರು ಉತ್ತರ
77ಲಿಕಿತಾ ಎಚ್ ಡಿಹಾಸನ
78ಲಿಸಾ ಎಚ್‌ಸಿಚಿಕ್ಕಬಳ್ಳಾಪುರ
79ಮಧುರಾ ಎಹಾಸನ
80ಮಧುಶ್ರೀಮಂಗಳೂರು
81ಮಂಜುನಾಥ ಬಿಬೆಂಗಳೂರು ಉತ್ತರ
82ಮೇಘನಾ ವಿಷ್ಣು ಭಟ್ಉತ್ತರ ಕನ್ನಡ
83ಮೊಹಮ್ಮದ್ ಆಶಿಕ್ ಎಸ್ಬೆಂಗಳೂರು ಉತ್ತರ
84ಮೋಹಿತ್ ಎಚ್ಹಾಸನ
85ಮೊನಿಶ್ ಗೌಡ ಎನ್ ಡಿಬೆಂಗಳೂರು ದಕ್ಷಿಣ
86ನಮ್ರತ್ ಜಿ ಪಿಮಧುಗಿರಿ
87ನಿತ್ಯ ಆರ್ಬೆಂಗಳೂರು ಉತ್ತರ
88ನಿವೇದಿತಾ ಎಚ್ ವೈಹಾಸನ
89ಪಂಚಮಿ ಸಿಶಿವಮೊಗ್ಗ
90ಪಂಚಮಿ ಆರ್ಶಿವಮೊಗ್ಗ
91ಪಣಿಕಾ ವೈ ಕೆಕೋಲಾರ
92ಪ್ರಜ್ಞಾ ಎಚ್ ಆರ್ಶಿವಮೊಗ್ಗ
93ಪ್ರಕೃತಿ ಪಿಬೆಂಗಳೂರು ಉತ್ತರ
94ಪ್ರಣತಿ ಮೂರ್ತಿಬೆಂಗಳೂರು ಉತ್ತರ
95ಪ್ರತೀಕ್ಷಾ ದಯಾನಂದಶಿವಮೊಗ್ಗ
96ಪ್ರೀತಂ ರವಳಪ್ಪ ಪಣಸುಡಕರ್ಬೆಂಗಳೂರು ಉತ್ತರ
97ಪ್ರೀತಿ ಎಸ್ಚಿಕ್ಕಬಳ್ಳಾಪುರ
98ಪ್ರೇರಣಾ ಬಿಶಿವಮೊಗ್ಗ
99ಪ್ರೇರಣಾ ಎಂ ಸಾಳುಂಕೆಬೆಂಗಳೂರು ಉತ್ತರ
100ಪುನೀತ ಬಿ ಬಿಹಾಸನ
101ಪೂರ್ವಿಕಾ ಎಸ್ಹಾಸನ
102ರಕ್ಷಾ ಬಿ ಎಂಚಿತ್ರದುರ್ಗ
103ರಕ್ಷಿತ್ ಸುರೇಶ್ ಚಿನಿವಾರ್ವಿಜಯಪುರ
104ರಕ್ಷಿತಾ ಎಸ್ ಎನ್ಶಿವಮೊಗ್ಗ
105ರೋಹಿಣಿ ಗೌಡರ್ಬೆಳಗಾವಿ
106ರುತು ಅಮೋಲ್ ತಲಾತಿಬೆಂಗಳೂರು ದಕ್ಷಿಣ
107ಎಸ್ ಬಿ ವಿದ್ಯಾಶ್ರೀಬಳ್ಳಾರಿ
108ಸಾಕ್ಷಿ ಪಾಟೀಲ್ಬೆಂಗಳೂರು ಉತ್ತರ
109ಸಮೀಕ್ಷಾ ಎಸ್ಶಿವಮೊಗ್ಗ
110ಸಂಸ್ಕೃತಿ ಪಿ ಕುಮಾರ್ಹಾಸನ
111ಸಂಜನಾ ಸಿ ಎಚಿತ್ರದುರ್ಗ
112ಸಂಜನಾ ಪ್ರವೀಣ್ಬೆಂಗಳೂರು ಉತ್ತರ
113ಶಾಮ ಎಸ್ ಶೆಟ್ಟಿಚಿಕ್ಕಮಗಳೂರು
114ಶರ್ಮೀನ್ ಎಂ ಶೇಖ್ಸಿರ್ಸಿ
115ಶಿವಾನಂದ ಬಸಗೌಡ ಪಾಟೀಲ್ಧಾರವಾಡ
116ಶ್ರಾವಣಿ ಜಿ ಆರ್ಬೆಂಗಳೂರು ಉತ್ತರ
117ಶ್ರೀಜಾ ಹೆಬ್ಬಾರ್ಮಂಗಳೂರು
118ಶ್ರೀಕಾಂತ ಬೆಳ್ಳೆಕಲಬುರ್ಗಿ
119ಶ್ರೇಯಾ ಸಿ ಜೆಹಾಸನ
120ಶ್ರೇಯಾ ದೇಸಾಯಿವಿಜಯಪುರ
121ಶ್ರೇಯಾ ಆರ್ಬೆಂಗಳೂರು ಉತ್ತರ
122ಸ್ಪೂರ್ತಿ ಜಿ ಸಿಹಾಸನ
123ಶ್ರೀ ಲಕ್ಷ್ಮಿ ಎಂಕೋಲಾರ
124ಸೃಷ್ಟಿ ಜೆಶಿವಮೊಗ್ಗ
125ಸೃಷ್ಟಿ ಮಹೇಶ ಪತ್ತಾರಚಿಕ್ಕೋಡಿ
126ಸೃಷ್ಟಿ ವಿ ಆರ್ಚಿತ್ರದುರ್ಗ
127ಸುಚರಿತ ಆರ್ಚಿಕ್ಕಮಗಳೂರು
128ಸುಪ್ರಿಯಾ ಕೆ ಎಸ್ತುಮಕೂರು
129ಸೂರಜ್ ಗೌಡ ಎಂ ಎನ್ಮಂಡ್ಯ
130ಸುಶ್ಮಿತಾಬೀದರ್
131ಸ್ವಸ್ತಿಮಂಗಳೂರು
132ತಸ್ನೀದ್ ಫಿರ್ದೋಸೆ ಹುಂಶಾಲ್ಹಾಸನ
133ತೇಜಶ್ವಿನಿ ಚವ್ಹಾಣಕೋಲಾರ
134ತೃಪ್ತಿ ಕೆ ಸಿಚಿಕ್ಕಬಳ್ಳಾಪುರ
135ತುಷಾರ್ ಕೇಶವ್ ಶಾನಭಾಗ್ಸಿರ್ಸಿ
136ವಿ ಅಕ್ಷತಾ ಕಾಮತ್ಮಂಗಳೂರು
137ವಾಸವಿ ಎಸ್ ಪುರಾಣಿಕ್ಬೆಂಗಳೂರು ದಕ್ಷಿಣ
138ವೀಕ್ಷಾ ವಿ ಶೆಟ್ಟಿಮಂಗಳೂರು
139ವಿಕಾಸ್ ಕೆ ಆರ್ಶಿವಮೊಗ್ಗ
140ವಿಷ್ಣು ಪ್ರಿಯಾ ಆರ್ಬೆಂಗಳೂರು ಉತ್ತರ
141ವಿವೇಕಾನಂದ ಮಹಾಂತೇಶ ಹೊನ್ನಾಳಿಚಿಕ್ಕೋಡಿ
142ವೆಂಕಟೇಶ ಯೋಹೇಶ್ ಡೊಂಗರೆಬೆಳಗಾವಿ
143ಯಲ್ಲಾಲಿಂಗ್ ಬಸಪ್ಪ ಸೂಳಿಭಾವಿವಿಜಯಪುರ
144ಯಶಸ್ವಿ ಅರ್ಸ್ ಎಂಮೈಸೂರು
145ಯುಕ್ತಾ ಬಿಚಿತ್ರದುರ್ಗ

2021-2022ನೇ ಸಾಲಿನ ಟಾಪರ್‌ಗಳ ಮನದಾಳದ ಮಾತು

ಎಸ್ಎಸ್ಎಲ್‌ಸಿ ಟಾಪರ್ ಸುಪ್ರಿಯಾ:

ಇವರು ತುಮಕೂರಿನ ತಿಪಟೂರಿನ ನಳಂದ ಹೈಸ್ಕೂಲ್ ವಿದ್ಯಾರ್ಥಿನಿ. ಶಿಕ್ಷಕರ ಮತ್ತು ಪೋಷಕರ ಬೆಂಬಲದಿಂದಾಗಿ ನಾನು 625ಕ್ಕೆ 625 ಅಂಕ ಗಳಿಸುವಂತಾಯಿತು. ಬೆಳಗ್ಗೆ 5-8  ಶಾಲೆಯಿಂದ ಬರುವುದು 7 ಗಂಟೆ ಆಗುತ್ತಿತ್ತು. ಬಂದ ಬಳಿಕ ರಾತ್ರಿ 10 ಗಂಟೆವರೆಗೂ ಓದುತ್ತಿದ್ದೆ ಎಂದಿದ್ದಾರೆ.

ಭಾಷಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಬರಲು ಕಾರಣ ನನ್ನ ಶಿಕ್ಷಕರು. ವ್ಯಾಕರಣದ ಬಗ್ಗೆ ಅವರು ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ನಮ್ಮ ಶಾಲೆಯಲ್ಲಿ ಜನವರಿ ಹೊತ್ತಿಗೆ ಎಲ್ಲಾ ಸಿಲಬಸ್ ಮುಗಿಸಿ ಬಳಿಕ ರಿವಿಷನ್ ಮಾಡಿದ್ದರು. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡುತ್ತೇನೆ. ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ನಾಗರೀಕ ಸೇವೆಗಳಿಗೆ ಸಿದ್ಧರಾಗಬೇಕು ಎಂಬ ಕನಸನ್ನು ಕಂಡಿದ್ದಾರೆ ಸುಪ್ರಿಯಾ. ನಾನು ಯಾವುದೇ ಮನೆಪಾಠಕ್ಕೆ ಹೋಗಿಲ್ಲ, ಶಾಲೆಯಲ್ಲಿ ಮಾಡಿದ್ದನ್ನು ಓದಿಕೊಳ್ಳುತ್ತಿದ್ದೆ ಎಂದಿದ್ದಾರೆ. ಕೋವಿಡ್ ಸಮಯದಲ್ಲಿ ಆನ್‌ಲೈನ್ ತರಗತಿಗಳನ್ನು ಕೇಳುತ್ತಿದ್ದೆ. 

ಎಸ್ಎಸ್ಎಲ್‌ಸಿ ಟಾಪರ್ ಹರ್ಷಿತಾ: 

ಈ ಸಲ ಪತ್ರಿಕೆಗಳೆಲ್ಲಾ ತುಂಬಾ ಸುಲಭ ಇತ್ತು. ಶಿಕ್ಷಕರು ತುಂಬಾ ಸಹಾಯ ಮಾಡಿದ್ದಾರೆ. ಕೋವಿಡ್ ಸಮಯದಲ್ಲೂ ಆನ್‌ಲೈನ್ ಕ್ಲಾಸಸ್ ಇತ್ತು ಹಾಗಾಗಿ ಸಮಸ್ಯೆ ಆಗಲಿಲ್ಲ. 

ಪಿಸಿಎಂಬಿ ತೆಗೆದುಕೊಂಡು ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದಿದ್ದೇನೆ ಎನ್ನುತ್ತಾರೆ. ಅಂದಿನ ಪಾಠವನ್ನು ಅಂದೇ ಮುಗಿಸಿಕೊಳ್ಳುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ರಿವಿಷನ್ ಅಷ್ಟೇ ಮಾಡ್ತಿದ್ದೆ. ಅಂದಂದಿನ ಪಾಠವನ್ನು ಅಂದೇ ಮುಗಿಸಿಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ.  

ಎಸ್ಎಸ್ಎಲ್‌ಸಿ ಟಾಪರ್ ಏಕ್ತಾ:

ಮೈಸೂರಿನ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಇವರು. ಸರ್ಕಾರಿ ಶಾಲೆಯಲ್ಲಿ ಓದಿ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿ ಏಕ್ತಾ. ಓದುವಪರು ಎಲ್ಲಿದ್ದರೂ ಓದುತ್ತಾರೆ ಎಂದು ಅಮ್ಮ ಹೇಳುತ್ತಿದ್ದರು. ಸಾಧನೆ ಮಾಡುವ ಛಲ ಇದ್ದರೆ ಇಂಟರ್‌ನ್ಯಾಷನಲ್ ಸ್ಕೂಲ್ ಆದರೂ ಒಂದೇ ಸರ್ಕಾರಿ ಶಾಲೆ ಆದರೂ ಒಂದೇ ಎಂಬ ಅಮ್ಮನ ಮಾತುಗಳೇ ನನಗೆ ಸ್ಫೂರ್ತಿ ಎನ್ನುತ್ತಾರೆ. 

ಟ್ಯೂಷನ್‌ಗೆ ಹೋಗುತ್ತಿರಲಿಲ್ಲ. ಅದೇ ಸಮಯವನ್ನು ಅಧ್ಯಯನಕ್ಕೆ ಉಪಯೋಗಿಸುತ್ತಿದ್ದೆ. ನನಗೆ ನನ್ನ ಅಪ್ಪ ಅಮ್ಮನೇ ಸ್ಫೂರ್ತಿ. ಸೈನ್ಸ್ ತೆಗೆದುಕೊಳ್ಳಬೇಕು ಎಂದಿದೆ. ಮುಂದೆ ಇಂಜಿನಿಯರಿಂಗ್ ಓದಬೇಕು ಎಂಬ ಆಸೆ ಇದೆ. NDA ಪರೀಕ್ಷೆಯಲ್ಲಿ ಪಾಸಾಗಿ ಡಿಫೆನ್ಸ್‌ನಲ್ಲಿ ಸೇವೆ ಸಲ್ಲಿಸಬೇಕು ಎಂದಿದ್ದೇನೆ ಎನ್ನುತ್ತಾರೆ ಏಕ್ತಾ. 

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಫಲಿತಾಂಶ 2021

2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು 21-06-2021 ರಿಂದ 05-07-2021 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ 19ರ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 19-07-2021 ಮತ್ತು 22-07-2021 ರಂದು ರಾಜ್ಯಾದ್ಯಂತ ನಡೆಸಲಾಯಿತು. ಕೋವಿಡ್ 19ರ ಹಿನ್ನೆಲೆಯಲ್ಲಿ ಭಾರತದ ಅನೇಕ ರಾಜ್ಯಗಳಲ್ಲಿ 10ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಆದರೆ ನಮ್ಮ ರಾಜ್ಯದಲ್ಲಿ ಮಂಡಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒ.ಎಂ.ಆರ್ ಆಧಾರಿತ ಪರೀಕ್ಷೆಗಳನ್ನು ನಡೆಸಲಾಯಿತು. 

ಈ ಪರೀಕ್ಷೆಗೆ ಒಟ್ಟು 876506 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 871443 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. 5063 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗದೆ ಮುಂದಿನ ಪರೀಕ್ಷೆಗೆ ಹೊಸ ಅಭ್ಯರ್ಥಿಗಳಾಗಿ ಹಾಜರಾಗಲು ಅವಕಾಶ ಪಡೆದಿರುತ್ತಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2020-21ರ ಫಲಿತಾಂಶ ವಿವರ

ಎಸ್​ಎಸ್​ಎಲ್​ಸಿ ಪರೀಕ್ಷೆ 2020-21ರ ಟಾಪರ್‌ಗಳು

625ಕ್ಕೆ 625 ಅಂಕ ಪಡೆದಿರುವ 157 ವಿದ್ಯಾರ್ಥಿಗಳು, 625ಕ್ಕೆ 623 ಅಂಕ ಪಡೆದಿರುವ 289 ವಿದ್ಯಾರ್ಥಿಗಳು, 625ಕ್ಕೆ 622 ಅಂಕ ಪಡೆದಿರುವ ಇಬ್ಬರು ವಿದ್ಯಾರ್ಥಿಗಳು, 625ಕ್ಕೆ 621 ಅಂಕ ಪಡೆದಿರುವ 449 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

  • ಆದ್ಯಾ ಕೆ.ವಿ. 625ಕ್ಕೆ 625 ಅಂಕ
  • ಅಭಿಷೇಕ್​ ಜಯಂತ್​ 625ಕ್ಕೆ 625
  • ಅದಿತಿ ಆರ್​​ 625ಕ್ಕೆ 625
  • ಜ್ಯೋತಿಕಾ 625ಕ್ಕೆ 625 ಅಂಕ
  • ಕೆ.ವಿ.ಆದ್ಯಾ, ಅಭಿಷೇಕ್​ ಜಯಂತ್, ಅದಿತಿ.ಆರ್​​, ಜ್ಯೋತಿಕಾ ಸೇರಿದಂತೆ 157 ವಿದ್ಯಾರ್ಥಿಗಳಿಗೆ 625 ಅಂಕ ಲಭಿಸಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಫಲಿತಾಂಶ 2020

2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮಾರ್ಚ್ 27 ರಿಂದ ಏಪ್ರಿಲ್ 09 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ 19ರ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 25.06.2020 ರಿಂದ 04.07.2020ರ ವರೆಗೆ ರಾಜ್ಯಾದ್ಯಂತ ನಡೆಸಲಾಯಿತು. 

ಈ ಪರೀಕ್ಷೆಗೆ ಒಟ್ಟು 811050 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. 18067 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗದೆ ಮುಂದಿನ ಪರೀಕ್ಷೆಗೆ ಹೊಸ ಅಭ್ಯರ್ಥಿಗಳಾಗಿ ಹಾಜರಾಗಲು ಅವಕಾಶ ಪಡೆದಿರುತ್ತಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆ 2019-2020ರ ಟಾಪರ್‌ಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2020 ರಲ್ಲಿ ಪೂರ್ಣ ಅಂಕಗಳನ್ನು (625 ರಲ್ಲಿ 625) ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ವಿದ್ಯಾರ್ಥಿಸ್ಥಳ
ಸನ್ನಿಧಿ ಮಹಾಬಲೇಶ್ವರ ಹೆಗಡೆಶಿರಸಿ
ಚಿರಾಯುಬೆಂಗಳೂರು
ನಿಖಿಲೇಶ್ ಮುರಳಿಬೆಂಗಳೂರು
ಧೀರಜ್ ರೆಡ್ಡಿ ಸಂಸದಮಂಡ್ಯ
ಅನುಷ್ದಕ್ಷಿಣ ಕನ್ನಡ
ತನ್ಮಯಿಚಿಕ್ಕಮಗಳೂರು

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಫಲಿತಾಂಶ 2019

ಮಾರ್ಚ್/ಏಪ್ರಿಲ್ 2019ರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ದಿನಾಂಕ 21.03.2019 ರಿಂದ 04.04.2019ರ ವರೆಗೆ ರಾಜ್ಯಾದ್ಯಾಂತ ಒಟ್ಟು 2847 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 825468 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ.

ಪರೀಕ್ಷಾ ಫಲಿತಾಂಶದ ವಿವರಗಳು

ಎಸ್‌ಎಸ್‌ಎಲ್‌ಸಿ 2019 ಟಾಪರ್‌ಗಳ ಪಟ್ಟಿ

ಈ ಸಲದ ಫಲಿತಾಂಶದಲ್ಲಿ ಇಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದರೆ, 11 ವಿದ್ಯಾರ್ಥಿಗಳು 625 ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ. ಜತೆಗೆ, 19 ವಿದ್ಯಾರ್ಥಿಗಳು 625 ಕ್ಕೆ 623 ಅಂಕಗಳನ್ನು ಗಳಿಸಿದ್ದಾರೆ.

ಆನೇಕಲ್‌ನ ಸೆಂಟ್ ಫಿಲೋಮಿನಾ ಹೈ ಸ್ಕೂಲ್‌ನ ಡಿ. ಸೃಜನಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕಲಬಾಗದ ಸಿವಿಎಸ್ ಕೆ ಹೈಸ್ಕೂಲ್‌ ವಿದ್ಯಾರ್ಥಿನಿ ನಾಗಾಂಜಲಿ ಪರಮೇಶ್ವರ ನಾಯ್ಕ 625 ಕ್ಕೆ 625 ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ. 

2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಟಾಪರ್‌ಗಳ ಪಟ್ಟಿಯನ್ನು ನೀವು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು:

2019ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಟಾಪರ್‌ಗಳ ಪಟ್ಟಿಯನ್ನು ನೀವು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು:

ಶ್ರೇಣಿಹೆಸರುಶೇಕಡಾವಾರು
1
ನಾಗಾಂಜಲಿ ಪರಮೇಶ್ವರ ನಾಯ್ಕ
100%
2ಡಿ ಸೃಜನಾ100%

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಪ್ರಮುಖ ದಿನಾಂಕಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ:

ಪ್ರಮುಖ ಪ್ರಕ್ರಿಯೆಗಳುದಿನಾಂಕಗಳು
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 10 ನೇ ತರಗತಿಯ ಫಲಿತಾಂಶಮೇ 19, 2023 (ತಾತ್ಕಾಲಿಕ)
ಫಲಿತಾಂಶ ಮರು-ಮೌಲ್ಯಮಾಪನ ಪ್ರಕ್ರಿಯೆಮೇ ಕಡೆಯ ವಾರ(ತಾತ್ಕಾಲಿಕ)
ಪೂರಕ ಪರೀಕ್ಷೆಜೂನ್‌ / ಜುಲೈ (ತಾತ್ಕಾಲಿಕ)
ಪೂರಕ ಪರೀಕ್ಷೆಯ ಫಲಿತಾಂಶದ ಘೋಷಣೆಜುಲೈ (ತಾತ್ಕಾಲಿಕ)

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೇಗೆ ಪರಿಶೀಲಿಸುವುದು?

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022ರ ಫಲಿತಾಂಶ ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ:

  • 1ನೇ ಹಂತ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್‌.

Karnataka SSLC result 2020 link

  • 2ನೇ ಹಂತ: SSLC/10 ನೇ ತರಗತಿ ಫಲಿತಾಂಶ 2022 – SSLC ಫಲಿತಾಂಶಗಳಿಗಾಗಿ.

Karnataka SSLC  result 2020 registration number

  • 3 ನೇ ಹಂತ: ಹೊಸ ಟ್ಯಾಬ್ ತೆರೆಯುತ್ತದೆ. ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಿಮ್ಮ ಹಾಲ್ ಟಿಕೆಟ್‌ನಲ್ಲಿ ಇರುವಂತೆ ನಮೂದಿಸಿ.
  • 4 ನೇ ಹಂತ: ವಿವರಗಳನ್ನು ಪರಿಶೀಲಿಸಿ ಮತ್ತು ‘Submit’ ಬಟನ್ ಕ್ಲಿಕ್ ಮಾಡಿ.
  • 5 ನೇ ಹಂತ: ನಿಮ್ಮ ಕರ್ನಾಟಕ SSLC ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಫಲಿತಾಂಶವನ್ನು ಎಚ್ಚರಿಕೆಯಿಂದ ಗಮನಿಸಿ. 
  • 6 ನೇ ಹಂತ: ಡೌನ್‌ಲೋಡ್ ಮಾಡಿ ಮತ್ತು ಫಲಿತಾಂಶದ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

* ತಮ್ಮ ಫಲಿತಾಂಶಗಳನ್ನು ಈ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಲಿಂಕ್‌.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವರ್ಷವಾರು ಫಲಿತಾಂಶ ವಿಶ್ಲೇಷಣೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ 2019ರ ಫಲಿತಾಂಶಕ್ಕೆ ಹೋಲಿಸಿದರೆ 2020ರಲ್ಲಿ ಒಟ್ಟಾರೆ ಉತ್ತೀರ್ಣದ ಶೇಕಡಾವಾರು ಇಳಿಕೆಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ವರ್ಷವಾರು ವಿಶ್ಲೇಷಣೆ ಕೆಳಕಂಡಂತಿದೆ:

ವರ್ಷಒಟ್ಟಾರೆ ಉತ್ತೀರ್ಣ ಶೇಕಡಾವಾರು
202071.8%
201973.7%
201871.93%
201767.87%
201679.16%
201581.82%

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶ್ರೇಣೀಕರಣ ವ್ಯವಸ್ಥೆ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶ್ರೇಣಿಯನ್ನು ನೀಡುತ್ತದೆ. ಶೇ. ಗ್ರೇಡಿಂಗ್ ಪದ್ಧತಿಯ ಪ್ರಕಾರ, 562 ಮತ್ತು 625 ರ ನಡುವೆ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಅತ್ಯುನ್ನತ ಶ್ರೇಣಿಯ A+ ಗ್ರೇಡ್ ನೀಡಲಾಗುತ್ತದೆ. 219-311 ನಡುವಿನ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಕಡಿಮೆ ದರ್ಜೆಯ C ಗ್ರೇಡ್‌ ನೀಡಲಾಗುತ್ತದೆ. ಈ ಶ್ರೇಣಿ ವ್ಯವಸ್ಥೆಯನ್ನು ಕೆಳಗೆ ನೀಡಲಾಗಿದೆ:

ಗ್ರೇಡ್ವಿದ್ಯಾರ್ಥಿಗಳ ಅಂಕಗಳ ಶ್ರೇಣಿ
A+562-625
A500-561
B+437-499
B375-436
C+312-374
C219-311

ಎಸ್‌ಎಸ್‌ಎಲ್‌ಸಿ  ಫಲಿತಾಂಶ ಪ್ರಕಟವಾದ ನಂತರ ಮಾಡಬೇಕಾದದ್ದೇನು?

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಬಳಿಕ  ವಿದ್ಯಾರ್ಥಿಗಳು ಫಲಿತಾಂಶದ ಪ್ರಿಂಟ್‌ಔಟ್ ತೆಗೆದುಕೊಂಡು ಪರಿಶೀಲಿಸಬೇಕು. ಈ ಪ್ರಿಂಟ್‌ಔಟ್‌ ತಾತ್ಕಾಲಿಕವಾಗಿದ್ದು, ಪ್ರವೇಶ ಉದ್ದೇಶಗಳಿಗಾಗಿ ಇದನ್ನು ಮಾನ್ಯ ಡಾಕ್ಯುಮೆಂಟ್ ಎಂದು ಪರಿಗಣಿಸಲಾಗುವುದಿಲ್ಲ.

ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ಮೂಲ ಅಂಕ ಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಪಿಯುಸಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಫಲಿತಾಂಶ ಪ್ರಕಟವಾದ ಬಳಿಕ ಮಂಡಳಿಯು ಅಂಕಪಟ್ಟಿಗಳನ್ನು ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳು/ಅಧ್ಯಯನ ಕೇಂದ್ರಗಳಿಂದ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರುಮೌಲ್ಯಮಾಪನ ಪ್ರಕ್ರಿಯೆ

ಪರೀಕ್ಷೆಗಳು ಅಥವಾ ಕೆಲವು ಪೇಪರ್‌ಗಳನ್ನು ತೆರವುಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ತಾವು ಪರೀಕ್ಷೆಗಳನ್ನು ಚೆನ್ನಾಗಿ ಬರೆದಿದ್ದೇವೆ ಮತ್ತು ಉತ್ತಮ ಅಂಕಗಳನ್ನು ಗಳಿಸಿರಬೇಕು ಎಂದು ಭಾವಿಸಬಹುದು. KSEEB ಅಂತಹ ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಗಳನ್ನು ಮರುಪರಿಶೀಲನೆ/ಮರುಮೌಲ್ಯಮಾಪನಕ್ಕಾಗಿ ಸಲ್ಲಿಸುವ ಆಯ್ಕೆಯನ್ನು ನೀಡುತ್ತದೆ. ತಮ್ಮ ಉತ್ತರ ಪತ್ರಿಕೆಗಳನ್ನು ಮರುಪರಿಶೀಲಿಸಲು ಬಯಸುವ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶುಲ್ಕದ ವಿವರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ವಿಭಾಗೀಯ/ಸುಧಾರಣಾ ಪರೀಕ್ಷೆಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶಗಳ ಮರು-ಮೌಲ್ಯಮಾಪನವನ್ನು ಪೂರ್ಣಗೊಳಿಸಿದ ನಂತರ KSEEB ವಿದ್ಯಾರ್ಥಿಗಳಿಗೆ ವಿಭಾಗೀಯ/ಸುಧಾರಣಾ ಪರೀಕ್ಷೆಗಳನ್ನು ನಡೆಸುತ್ತದೆ. ವಿಭಾಗೀಯ/ಸುಧಾರಣಾ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪುನರಾವರ್ತಿಸದೆ SSLC ಪರೀಕ್ಷೆಗಳನ್ನು ತೆರವುಗೊಳಿಸಲು ಎರಡನೇ ಅವಕಾಶವನ್ನು ನೀಡುತ್ತದೆ. ವಾರ್ಷಿಕ ಪರೀಕ್ಷೆಗಳು ಅಥವಾ ಕೆಲವು ವಿಷಯಗಳಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ವಿಭಾಗೀಯ ಪರೀಕ್ಷೆಗಳಿಗೆ ಹಾಜರಾಗಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು: FAQಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳನ್ನು (FAQs) ಕೆಳಗೆ ನೀಡಲಾಗಿದೆ:

ಪ್ರ. 1: ನಾನು ಕರ್ನಾಟಕ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಎಲ್ಲಿ ಪರಿಶೀಲಿಸಬಹುದು?

ಉತ್ತರ: ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಪುಟದಲ್ಲಿ ಒದಗಿಸಲಾದ ಲಿಂಕ್‌ಗಳ ಮೂಲಕ ನೀವು ವೆಬ್‌ಸೈಟ್ ಅನ್ನು ಪ್ರವೇಶಿಸಬಹುದು.

ಪ್ರ. 2: ಕರ್ನಾಟಕ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡುತ್ತದೆ?

ಉತ್ತರ: ಕರ್ನಾಟಕ SSLC ಫಲಿತಾಂಶವನ್ನು 2023ರ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಪ್ರ. 3: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳಿಗೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು?

ಉತ್ತರ: ಪೂರಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್/ಏಪ್ರಿಲ್ ತಿಂಗಳ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಬಳಿಕ ಆರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪ್ರ. 4: ನಾನು ಒಂದು ವಿಷಯದಲ್ಲಿ ಅನುತ್ತೀರ್ಣರಾದರೆ ಏನು ಮಾಡಬಹುದು?

ಉತ್ತರ: ನೀವು ಪೂರಕ ಪರೀಕ್ಷೆಗಳಿಗೆ ಹಾಜರಾಗಬಹುದು.

ಪ್ರ. 5: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಗ್ರೇಡಿಂಗ್ ವ್ಯವಸ್ಥೆ(ಶ್ರೇಣಿ ವ್ಯವಸ್ಥೆ)ಯನ್ನು ಅನುಸರಿಸುತ್ತದೆಯೇ?

ಉತ್ತರ: ಹೌದು. ಮಂಡಳಿಯು ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಶ್ರೇಣಿಗಳನ್ನು ನೀಡುತ್ತದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. ʻಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್‌ಗಳುʼ ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ